ಶಿರಸಿ: ಇಲ್ಲಿನ ಬನವಾಸಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಗುಡ್ನಾಪುರದಲ್ಲಿ ಸೇವಾ ಸಮರ್ಪಣ ಕಾರ್ಯಕ್ರಮದಡಿಯಲ್ಲಿ ಶ್ರೀ ಬಂಗಾರೇಶ್ವರ ದೇವರಿಗೆ ಪೂಜೆ ಸಲ್ಲಿಸಿ 71 ದೀಪಗಳನ್ನು ಬೆಳಗಿಸಿ ಕೆರೆಯಲ್ಲಿ ತೇಲಿ ಬಿಡಲಾಯಿತು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್ ಗುಡ್ನಾಪುರ, ಪಂಚಾಯತ್ ಅಧ್ಯಕ್ಷ ಶಿವಶಂಕರ್ ಗೌಡ, ತಾಲೂಕು ಉಪಾಧ್ಯಕ್ಷ ಗಣಪತಿ ನಾಯ್ಕ್, ತಾಲೂಕ್ ಸದಸ್ಯರಾದ ಚಂದ್ರಪ್ಪ ಗುಡ್ನಾಪುರ, ಶಕ್ತಿಕೇಂದ್ರದ ಅಧ್ಯಕ್ಷ ಭೋಜಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರೂಪ ನಾಯ್ಕ್, ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ನಾಯ್ಕ್ ಹಾಗೂ ಮುಖಂಡರಾದ ರಘು ನಾಯ್ಕ್, ಅಶೋಕ್ ನಾಯ್ಕ್, ರೈತ ಮೋರ್ಚಾ ಕಾರ್ಯದರ್ಶಿಯಾದ ಕುಮಾರ್ ನಾಯ್ಕ್, ಶಕ್ತಿಕೇಂದ್ರದ ಕಾರ್ಯದರ್ಶಿ ರಾಜು ತಳವಾರ, ಪಂಚಾಯತ್ ಸದಸ್ಯರಾದ ಗೌರಮ್ಮ ಗಾಣಿಗೇರ, ಮುಖಂಡರಾದ ವಿನಾಯಕ್ ಗುಡ್ನಾಪುರ, ಅಣ್ಣಪ್ಪ ಹಡಲಗಿ, ಮಂಜುನಾಥ್ ಗಾಣಿಗೇರ್, ದೇವೇಂದ್ರ ಗುಡ್ನಾಪುರ, ಹಾಗೂ ಬೂತ್ ಅಧ್ಯಕ್ಷರುಗಳಾದ ರವೀಂದ್ರ ನಾಯ್ಕ್, ವಿಷ್ಣುಗೋಪ ಮತ್ತು ಕೇಶವ್ ಬಡಿಗೇರ್ ಹಾಗೂ ಪಕ್ಷದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.